ಬಸವಣ್ಣ   
  ವಚನ - 983     
 
ಅಯ್ಯಾ, ಎನಗೆ ರುದ್ರಾಕ್ಷಿಯೇ ಸರ್ವಪಾವನ, ಅಯ್ಯಾ, ಎನಗೆ ರುದ್ರಾಕ್ಷಿಯೇ ಸರ್ವಸಿದ್ಧಿ. ಅಯ್ಯಾ, ನಿಮ್ಮ ಪಂಚವಕ್ತ್ರಂಗಳೇ ಪಂಚಮುಖದ ರುದ್ರಾಕ್ಷಿಗಳಾದುವಾಗಿ, ಅಯ್ಯಾ, ಕೂಡಲಸಂಗಮದೇವಾ, ಎನ್ನ ಮುಕ್ತಿಪಥಕ್ಕೆ ಈ ರುದ್ರಾಕ್ಷಿ ಸಾಧನವಯ್ಯಾ.