ಬಸವಣ್ಣ   
  ವಚನ - 985     
 
ಅಯ್ಯಾ, ಎನ್ನ ಕೈಯ ದರ್ಪಣ (ಸಂದಿತ್ತು), ಆಸ್ಥಾನದ ಜ್ಯೋತಿ ನಂದಿತ್ತು, ಸರಸ್ವತಿಯ ಭಂಡಾರ ಸೊರೆಹೋಯಿತ್ತು, ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು. ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು, ನಾನೆಲ್ಲಿ ಅರಸುವೆನು? ಕೂಡಲಸಂಗಮದೇವಯ್ಯ ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು?