ಬಸವಣ್ಣ   
  ವಚನ - 991     
 
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಪೂರ್ವಾಚಾರಿಯಾದೆನಯ್ಯಾ. ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ವೃಷಭನಾದೆನಯ್ಯಾ. ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಸಂಗನಬಸವಣ್ಣನಾಗಿ, ಗೊಹೇಶ್ವರನ ಶರಣನ ಮಹಾಬಸುರೊಳಗೆ ಕಂದನಾಗಿರ್ದೆ ಕಾಣಾ, ಕೂಡಲಸಂಗಮದೇವಾ.