ಬಸವಣ್ಣ   
  ವಚನ - 1013     
 
ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ, ಅರಿವನ್ನಕ್ಕರ ಹಾಡಿ ಹೊಗಳಿದೆ. ಅರಿವುಗೆಟ್ಟು ಮರಹು ನಷ್ಟವಾಗಿ, ಭಾವ ನಿರ್ಭಾವವಾಗಿ ನಿಜವೊಳಗೊಂಡಿತ್ತಾಗಿ, ಕೂಡಲಸಂಗಯ್ಯನಲ್ಲಿ ಸರ್ವನಿವಾಸಿಯಾಗಿರ್ದೆನು.