ಬಸವಣ್ಣ   
  ವಚನ - 1018     
 
ಅರಿವಿಲ್ಲದ ಕಾಯವುಂಟೆ? ಅರಿವಿಲ್ಲದ ಪ್ರಾಣವುಂಟೆ? ಅರಿವಿಲ್ಲದ ನಿಲವುಂಟೆ? ಭಾವವಿಲ್ಲದ ಭಕ್ತಿಯುಂಟೆ? ಕೂಡಲಸಂಗಮದೇವಾ, ನೀವು ಪರಿಪೂರ್ಣರಾಗಿಪ್ಪಿರಾಗಿ, ಅವಗುಣಕ್ಕೆ ತೆರಹಿಲ್ಲ.