ಬಸವಣ್ಣ   
  ವಚನ - 1024     
 
ಅರ್ಪಿಸಿದ ಸುಖ ತಪ್ಪದೆ ಇಂಬುಗೊಂಡಿತ್ತಾಗಿ ಅಲ್ಲಿಯೆ ಅರ್ಪಿತವಾಯಿತ್ತಯ್ಯಾ. ಅಂಗವೆಂಬ ಶಂಕೆ ತಾನೆತ್ತ ಹೋಯಿತ್ತೆಂದರಿಯೆ, ಕಾಯಸುಖವೆ ಲಿಂಗಸುಖಕ್ಕೀಡಾಯಿತ್ತು. ಅಂತಪ್ಪ ಅರ್ಪಿತ ದಷ್ಟ ತಲೆಗೇರಿದಲ್ಲಿ ನೀ ಮುಂತಾಗಿರ್ದೆ, ಕೂಡಲಸಂಗಮದೇವಾ.