ಬಸವಣ್ಣ   
  ವಚನ - 1058     
 
ಇಂದ್ರನಾವಾಸ, ಉಪೇಂದ್ರನ ಓಲಗ ಚಂದ್ರಮೌಳಿಯನರಿಯದೆ ಹೋಯಿತ್ತು, ಬಂಧಮೋಕ್ಷದ ಭವಬಂಧನ ಬಿಡದನ್ನಕ್ಕರ ಮತ್ತೊಂದರ ಮುಖ ಜನಿಸಿತಲ್ಲಾ. ಕೂಡಲಸಂಗಮದೇವಾ, ಚೆನ್ನಬಸವಣ್ಣನ ಸನ್ನಿಧಿಯಿಂದಲಾನು ಬದುಕಿದೆನು.