ಬಸವಣ್ಣ   
  ವಚನ - 1067     
 
ಉದಕದ ಬರವು ವಿಶ್ವಕ್ಕೆ ಹೊಸಪರಿ ಎಂಬಂತೆ ಮಾಟವ ಮಾಡುವನು ಜಂಗಮಕ್ಕೆ, ನಿರವಯದ ಸುಳುಹು ನಿಬ್ಬೆರಗಿನ ಬರವಿಂಗೆ. ಕೂಡಲಸಂಗಮದೇವ ಕೇಳಯ್ಯಾ, ಇಂತಲ್ಲದೆ ನಿಮ್ಮ ನಿಜವನರಿಯಬಾರದೆನಗೆ.