ಬಸವಣ್ಣ   
  ವಚನ - 1068     
 
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ: ಉದಯವೆಂದೇನೊ ಶರಣಂಗೆ, ಮಧ್ಯಾಹ್ನವೆಂದೇನೊ ಶರಣಂಗೆ, ಅಸ್ತಮಾನವೆಂದೇನೊ ಶರಣಂಗೆ. ಮಹಾಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ, ನಮ್ಮ ಕೂಡಲಸಂಗಮದೇವರು.