ಬಸವಣ್ಣ   
  ವಚನ - 1073     
 
ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು, ಗಣನೆಯಿಲ್ಲದೆ ನೀಡುತ್ತಿರಲು, ತೋರದ ಮುನ್ನವೆ ಅರ್ಪಿತವಾದವು. ಇಂತು ಎಣಿಸಿ ನೋಡೆಹೆನೆಂದಡೆ ಮನಕೆ ಸಾಧ್ಯವಲ್ಲ, ಬಯಲು ಬಾಯಿದೆಗೆದಂತೆ ಉಣ್ಣುತ್ತಿದ್ದಾನು, ಕೂಡಲಸಂಗಮದೇವನು.