ಬಸವಣ್ಣ   
  ವಚನ - 1074     
 
ಎತ್ತ ನೋಡಿದಡತ್ತ ನಿಮ್ಮ ತೇಜವನೇ ಕಾಬೆನಲ್ಲದೆ ಮತ್ತೊಂದ ಕಾಣೆ. ಎನ್ನ ಚಿತ್ತ ನೋವಲ್ಲಿ ನೊಂದಲ್ಲಿ ನೆನೆವಲ್ಲಿ ನೀನೇ ಇಪ್ಪೆಯಾಗಿ, ಬೆಳಗಿರಲು ಕತ್ತಲೆಯುಂಟೆ ಕೂಡಲಸಂಗಮದೇವಾ?