ಬಸವಣ್ಣ   
  ವಚನ - 1083     
 
ಎನ್ನ ಕಾಯದ ಕತ್ತಲೆ ಹಿಂಗಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನ ತನುಮನಧನದ ಲೋಭವಳಿದು ತಳವೆಳಗಾಯಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನನೆಡೆಗೊಂಡ ಅಹಂಕಾರ ನಿರ್ವಯಲಾಯಿತ್ತು ಚೆನ್ನಬಸವಣ್ಣಾ ಇಂದಿನಲ್ಲಿ. ಕೂಡಲಸಂಗಮದೇವರ ತೃಪ್ತಿಯ ತೆರನ ನೀನು ತೋರಿದೆಯಾಗಿ ನಾನು ಬದುಕಿದೆ ಕಾಣಾ, ಚೆನ್ನಬಸವಣ್ಣಾ.