ಬಸವಣ್ಣ   
  ವಚನ - 1089     
 
ಎನ್ನ ತನುವಿಂಗೆ ನೀನೊಡೆಯ, ಎನ್ನ ಮನಕ್ಕೆಯೂ ನೀನೊಡೆಯ, ಎನ್ನ ಧನಕ್ಕೆಯೂ ನೀನೊಡೆಯನಾದ ಬಳಿಕ ಎನ್ನರಿವು ನಿನ್ನದು, ಎನ್ನ ಮರಹು ನಿನ್ನದು. ಕೂಡಲಸಂಗಮದೇವಾ, `ಭೃತ್ಯಾಪರಾಧಃ ಸ್ವಾಮಿನೋ ದಂಡಃ' ಎಂಬುದ ವಿಚಾರಿಸಿ ನೋಡಾ ಪ್ರಭುವೆ.