ಬಸವಣ್ಣ   
  ವಚನ - 1091     
 
ಎನ್ನ ನುಡಿ ಎನಗೆ ನಂಜಾಯಿತ್ತು, ಎನ್ನ ಅಲಗೆ ಎನ್ನ ಕೊಂದಿತ್ತು. ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ. ತರಳತನದಲ್ಲಿ ಕೆಟ್ಟೆನಯ್ಯಾ, ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ. ಆಳು ಮುನಿದಡೆ ಆಳೇ ಕೆಡುವನು, ಆಳ್ದ ಮುನಿದಡೆ ಆಳೇ ಕೆಡುವನು. ನೀವು ಮುನಿದಡೆ ನಾನೇ ಕೆಡುವೆನಯ್ಯಾ ಕೂಡಲಸಂಗಮದೇವಾ.