ಬಸವಣ್ಣ   
  ವಚನ - 1099     
 
ಎನ್ನ ವಚನರಚನೆಯ ಮೆಚ್ಚ, ಅಡಿಗಡಿಗೆನ್ನ ಮನದ ಮೈಲಿಗೆಯ ತೊಳೆದು ಹೋದ ಪ್ರಾಣವ ಮರಳಿ ತಂದು ರಕ್ಷಿಸಿದ. ಕೂಡಲಸಂಗಮದೇವಯ್ಯಾ, ಮಡಿವಾಳಯ್ಯಗಳ ಕರುಣದಿಂದ ಮರುಳುಶಂಕರದೇವರ ನಿಲವ ಕಂಡು ಬದುಕಿದೆನು ಕಾಣಾ ಕಿನ್ನರಿ ಬ್ರಹ್ಮಯ್ಯಾ.