ಬಸವಣ್ಣ   
  ವಚನ - 1108     
 
ಒಂದೆತ್ತಿಗೈವರು ಗೊಲ್ಲರು, ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ. ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ. ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ ? ಕೂಡಲಸಂಗಮದೇವಯ್ಯಾ.