ಬಸವಣ್ಣ   
  ವಚನ - 1128     
 
ಕಡಿ(ಯಲು) ಕುಳ್ಳಿರಿಸಿದಲ್ಲಿ, ಕತ್ತಿಯನೆತ್ತಿ ತಲೆಯ ಹೊಡೆ(ಯೆ) ಹೊಡೆ(ಯೆ) ಬದುಕಿದವರುಂಟು, ಕಡಲ ನಡುವೆ ಹಡಗೊ(ಡೆ)ದು ಹಲಗೆಯ ಹಿಡಿದು ತಡಿಗೆ ಸೇರಿ ಬದುಕಿದವರುಂಟು, ಎನ್ನೊಡೆಯ ಕೂಡಲಸಂಗಮದೇವ ಬರೆದ ಬರಹವ ತೊಡೆಯಬಲ್ಲರೆ ಹರಿ ಸುರ ಬ್ರಹ್ಮಾದಿಗಳು?