ಬಸವಣ್ಣ   
  ವಚನ - 1129     
 
ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ, ಕರ್ದಮವನೀಂಟಿದ ಸುಜಲದಂತೆ, ಮಧುರರಸವನರಿದ ಜಿಹ್ವೆಯಂತೆ, ಎನ್ನ ಕಂಗಳಿಗೆ ದೃಷ್ಟವಾಗಿ, ಮನಕ್ಕೆ ಮನೋಹರವಾಗಿ ಕೂಡಲಸಂಗಮದೇವರಲ್ಲಿ ಪ್ರಭುದೇವರ ಸುಳುಹು ಚಿಹ್ನವಾಯಿತ್ತು.