ಬಸವಣ್ಣ   
  ವಚನ - 1134     
 
ಕರಿಗೊರಳು ಮೆರೆವ ಚತುರ್ಭುಜ ಎಳೆವಾವಿನ ಕುಂಡಲವನಿಕ್ಕಿ, ಪೊಳೆವ ತ್ರಿಶೂಲ ವೃಷಭವಾಹನದೇವ, ಉಮೆಯೊಡನೆ ಸಾರ್ದು ಬೇಡಿದ ವರವೀವನೇ ಕೂಡಲಸಂಗಮದೇವ.