ಬಸವಣ್ಣ   
  ವಚನ - 1137     
 
ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು, ಹಾಲೊಳಗೆ ತುಪ್ಪವುಂಟು, ಅಂತರಾಮಿಯಲ್ಲಿ ಶಿವನಿಹನು. ಇದೇನು ಕಾರಣ ಕತ್ತಲೆ ? ಕಾಣಬಾರದು, ತೋರಬಲ್ಲ ಗುರು ಸುಳಿಯನು, ಕೂಡಲಸಂಗಮದೇವಾ.