ಬಸವಣ್ಣ   
  ವಚನ - 1158     
 
ಕೆರೆಯ ತೂಂಬಿನಾಪ್ಯಾಯನದಂತೆ, ಪ್ರಭುದೇವಾ ನಿಮ್ಮ ಆಪ್ಯಾಯನವು. ಕೆರೆಯ ತೂಬ ಬಿಡಲೊಡನೆ ಹಲವು ಕದಳಿಗಳೆಲ್ಲಾ ತಣಿದವಯ್ಯಾ. ಪರಿಣಾಮವೆಂಬ ಕೆರೆಗೆ ಪ್ರಭುವೆಂಬ ತೂಂಬನುಚ್ಚಲು, ಅಸಂಖ್ಯಾತರೆಂಬ ಕದಳಿಗಳೆಲ್ಲಾ (ತ)ಣಿದವಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರು ಸರ್ವಜೀವದಯಾಪಾರಿಗಳೆಂಬುದು ಇಂದೆನಗೆ ಅರಿಯ ಬಂದಿತಯ್ಯಾ.