ಬಸವಣ್ಣ   
  ವಚನ - 1165     
 
ಕೋಟಿ ರುದ್ರರು ಮಡಿದರು, ಅನಂತಕೋಟಿ ಬ್ರಹ್ಮವಿಷ್ಣುಗಳು ಮಡಿದರು, ನರರು-ಸುರರು-ಗರುಡ ಗಂಧರ್ವರು ಮಡಿದರು. ಅವರ ಮಡಿಯೊಳಗೆ ತಾನಾಗದೆ, ತಾನೊಂದು ಹೊಸ ಬಿಳಿದ ಮಡಿಮಾಡಿ ಎನಗುಡಕೊಟ್ಟು ಎನ್ನ ಬದುಕಿಸಿಕೊಂಡಾತ, ಮಡಿವಾಳ ಕಾಣಾ, ಕೂಡಲಸಂಗಮದೇವಾ.