ಬಸವಣ್ಣ   
  ವಚನ - 1186     
 
ಚಂದ್ರನು ಅಮೃತಕರನಾದಡೇನಯ್ಯಾ, ಒಳಗಣ ಕಳಂಕ ಬಿಡದನ್ನಕ್ಕರ? ಸೂರ್ಯ ಮಹಾಪ್ರಕಾಶನಾದಡೇನಯ್ಯಾ, ಅಸ್ತಮಾನಕ್ಕೆ ಅಸ್ತಂಗತನೆಂಬ ಹೀನ ಬಿಡದನ್ನಕ್ಕರ? ಆನು ನಿಮ್ಮ ಕೃಪೆಯ ಹಡೆದು ಫಲವೇನಯ್ಯಾ, ನಿಮ್ಮ ಶರಣರು ಎನ್ನ ಮೇಲೆ ಮುನಿದು ಹೋದ ಬಳಿಕ? ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನದಲ್ಲಿ ಎನ್ನ ಮೇಲೆ ಕರುಣ ಹುಟ್ಟಿಬಪ್ಪಂತೆ ಮಾಡಯ್ಯಾ.