ಬಸವಣ್ಣ   
  ವಚನ - 1199     
 
ಜಿಹ್ವೆ ಗುರು, ಕಂಗಳು ಲಿಂಗ, ನಾಸಿಕವಾಚಾರ, ಹಸ್ತ ಜಂಗಮ, ಶ್ರೋತ್ರ ಪ್ರಸಾದ. ಈ ಪಂಚಾಚಾರಸಂಜ್ಞೆಯನು, ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯೋಗಸಂಜ್ಞೆಯನೆನಗೆ ನೀ ಕರುಣಿಸಲಾಯಿತ್ತು, ಕೂಡಲಸಂಗಮದೇವಾ.