ಬಸವಣ್ಣ   
  ವಚನ - 1200     
 
ತನು ದೊರೆಕೊಂಡಡೆ ಮನ ದೊರೆಕೊಳ್ಳದು, ಮನ ದೊರೆಕೊಂಡಡೆ ತನು ದೊರೆಕೊಳ್ಳದು, ತನುಮನ ದೊರೆಕೊಂಡಡೆ ಧನ ದೊರೆಕೊಳ್ಳದು, ತನುಮನಧನ ದೊರೆಕೊಂಡಡೆ ಸತಿಸುತರೆಡೆಯಾಟ ದೊರೆಕೊಳ್ಳದು, ಸತಿಸುತರೆಡೆಯಾಟ ದೊರೆಕೊಂಡಡೆ ಜಂಗಮಕ್ಕೆ ಮಾಡುವ ವರ್ಮ ದೊರೆಕೊಳ್ಳದಯ್ಯಾ, ಕೂಡಲಸಂಗಮದೇವಾ.