ಬಸವಣ್ಣ   
  ವಚನ - 1207     
 
ತಾ ಸವಿದಲ್ಲದೆ ಆ ಸವಿಯ ಲಿಂಗಕ್ಕರ್ಪಿಸಲಾಗದು. ಅದೇನು ಕಾರಣವೆಂದಡೆ, ಆ ಲಿಂಗವು ಕಹಿ-ಸಿಹಿಯರಿಯದಾಗಿ. ಇದು ಕಾರಣ, ಕಹಿ ಎಂದು ಕಳೆದು, ಸಿಹಿ ಎಂದು ಕೊಂಡಡೆ, ಕೊಂಡುದು ಕಿಲ್ಬಿಷ, ಕೂಡಲಸಂಗಮದೇವಾ.