ಬಸವಣ್ಣ   
  ವಚನ - 1223     
 
ದೇವರ ಪಾದಕ್ಕೆ ಸಂದಲ್ಲಿ ಆತನ ಶರೀರವ ಸಮಾಧಿಯಲ್ಲಿ ನಿಕ್ಷೇಪವಂ ಮಾಡಿ ಲಿಂಗಭಕ್ತರಿಗೆ ವಿಭೂತಿವೀಳೆಯವಂ ಕೊಡುವುದೆ ಸ(ದಾಚಾರ). ಹೀಂಗಲ್ಲದೆ, ಹೆಣ ಶೃಂಗಾರವ ಮಾಡಿಸಿ, ಹರೆ ಕಹಳೆ ಸಹಿತ ವಿಮಾನದಲ್ಲಿ ಕೊಂಡುಹೋಗಿ, ಹೂಳಿ, ಶ್ರಾದ್ಧ ಕೂಳ ಮಾಡು(ವರು) ಸದಾಚಾರಕ್ಕೆ ದೂರವಯ್ಯಾ ಕೂಡಲಸಂಗಮದೇವಾ.