ಬಸವಣ್ಣ   
  ವಚನ - 1230     
 
ಧರೆಯಾಕಾಶದ ನಡುವೆ ಒಂದು ಮಾಮರ ಹುಟ್ಟಿತ್ತು. ಆ ಮರಕ್ಕೆ ಕೊಂಬೆರಡು, ಎಲೆ ಮೂರು, ಮೂವತ್ತಾರು ಪುಷ್ಪ, ಕಾಯಿ ಒಂದೆ, ಹಣ್ಣು ರಸ ತುಂಬಿದಲ್ಲಿ ಏನನೂ ಕಾಣೆ, ಎಲೆ ಉದುರಿದಡೆ ಹಣ್ಣು ತೊಟ್ಟಬಿಟ್ಟು ಬಿದ್ದಿತ್ತು, ನಿಜದಲ್ಲಿ ನಿರ್ವಯಲಾದರು. ಪ್ರಭುವಿನ ಕಾರುಣ್ಯಪ್ರಸಾದವ ನಾನು ಕೊಂಡೆನಾಗಿ, ಕೂಡಲಸಂಗಮದೇವರು ಇತ್ತ ಬಾರೆಂದು ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು.