ಬಸವಣ್ಣ   
  ವಚನ - 1246     
 
ನಾರಗೋಣಿಯ ಮೂಲೆಯ ಹೊಲಿದು, ನೀರಭಂಡವ ತುಂಬಿದರಯ್ಯಾ, ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ. ಊರ (ಸೂರೆ)ಗೊಳ್ಳದ ಮುನ್ನ ಕೂಡಿಕೊಳ್ಳಿ ಕೂಡಲಸಂಗಮದೇವನ.