ಬಸವಣ್ಣ   
  ವಚನ - 1248     
 
ನಿಜರೂಪು ರೂಪಿನಿಂದ ನಿಂದಿತ್ತು, ಆ ರೂಪು ನಿಜರೂಪವನವಗ್ರಹಿಸಿತ್ತು. ನಿಜರೂಪು ನಿರ್ಣಯದಲ್ಲಿ ನಿಂದ ನಿಜಶರಣರ ನಿಲವ ಕಾಯವಿಡಿದು ಕಂಡಹೆನೆಂದಡೆ ಕಾಣಬಹುದೆ? ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು, ಎನಗೆ ಸಾಧ್ಯವಪ್ಪುದೆ?