ಬಸವಣ್ಣ   
  ವಚನ - 1252     
 
ನಿನ್ನಾಳಿ ಕುಂಬಾರನ ಕೆಲಸದೋಪಾದಿ; ಉದಕದ ಶೈತ್ಯವನೆ ಕೊಟ್ಟು, ನೂಲೆಳೆಯಲ್ಲಿ ಗೋಣ ಕೊಯ್ದು, ವಾಯುವಿನ ಶೈತ್ಯದಲ್ಲಿ ಆರಿಸಿ, ಅಗ್ನಿಮುಖದಲ್ಲಿ ಬೇರೆ ಭಾಂಡವೆಂದೆನಿಸಿದಂತೆ ಕೂಡಲಸಂಗಮದೇವಾ.