ಬಸವಣ್ಣ   
  ವಚನ - 1256     
 
ನಿರ್ಲೇಪವಾದ ನಿಜಗುಣಿ ನೋಡಯ್ಯಾ, ಕಾಮಿಸದ ಕಲ್ಪಿಸದ ಪ್ರಸಾದಿ ನೋಡಯ್ಯಾ. ಬಯಸಲಿಲ್ಲದ ಪ್ರಸಾದಿ ಗುರುವಿನ ಮುಖದಿಂದ ಬಂದ ಪ್ರಸಾದವಲ್ಲದೆ ಮತ್ತೇನನೂ ಮುಟ್ಟಲೀಯನು, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.