ಬಸವಣ್ಣ   
  ವಚನ - 1264     
 
ಪಂಚೇಂದ್ರಿಯಂಗಳೆಂಬ ಪಂಚವಿಷಯವೆಂಬ ವಿಷಯದೊಳಗೆ ಆಳುತ್ತ ಏಳುತ್ತ ಬೀಳುತ್ತಲಿದೇನೆ, ಓಂ ನಮಃ ಶಿವಾಯ, ಓಂ ನಮಃ ಶಿವಾಯಯೆಂಬುತಿದೇನೆ, ಕೂಡಲಸಂಗಮದೇವಾ, ಪರಿಹರಿಸುವರ ಕಾಣೆ.