ಬಸವಣ್ಣ   
  ವಚನ - 1303     
 
ಮನ ಮಜ್ಜನ, ತನು ಸಿಂಹಾಸನ, ನೆನಹೆ ನಾಗವತ್ತಿಗೆಯಾಯಿತ್ತಾಗಿ ಅರಿಯಲಿಲ್ಲ, ಮರೆಯಲಿಲ್ಲ ತೆರಹಿಲ್ಲದೆ ಇದ್ದುದಾಗಿ. ಎಲೆ, ಕೂಡಲಸಂಗಮದೇವಯ್ಯಾ, ಈಯನುವ ಅಲ್ಲಮ ತೋರಿದನು.