ಬಸವಣ್ಣ   
  ವಚನ - 1322     
 
ಮೆಲ್ಲಮೆಲ್ಲನೆ ಭಕ್ತಾದ್ಯೈಕ್ಯಾಂತವಾದೆಹೆನೆಂದು ತಾಮಸಜ್ಞಾನದಲ್ಲಿರಲು, ಅದಕ್ಕೆ ʼನೀನು ನಿತ್ಯವ ಪಡೆದು ಬಂದೆಯಾʼ ? ಎಂದು ನಿಂದ ಸ್ಥಲದಲ್ಲಿಯೆ ನಿಜ ಷಡುಸ್ಥಲವಡಗದಿರ್ದಡೆ ಜಂಗಮದಾಸೋಹವೇಕೆಂದು ಹೇಳಿ, ನಿಜವ ಕರುಣಿಸಿದನಾಗಿ, ಲಿಂಗಜಂಗಮದ ಭೇದದ ಚೆನ್ನಬಸವಣ್ಣ ಬಲ್ಲ, ನಾನು ಆತನಿರಿಸಿದಂತಿಪ್ಪೆನಯ್ಯಾ. ಇದು ಕಾರಣ, ಕೂಡಲಸಂಗಮದೇವರಲ್ಲಿ ಚಂದಯ್ಯಗೆ ಶರಣೆಂದು ಶುದ್ಧನಯ್ಯಾ ಪ್ರಭುವೆ.