ಬಸವಣ್ಣ   
  ವಚನ - 1334     
 
ಲಿಂಗಜಂಗಮಪ್ರಸಾದವೆಂಬರು; ಲಿಂಗವೆಂದಡೆ ಅಂಗದೊಳಗಾಯಿತ್ತು, ಜಂಗಮವೆಂಬೆನೆ ವಾಸಿಗೊಳಗಾಯಿತ್ತು, ಪ್ರಸಾದವೆಂಬೆನೆ ವಿಷದೊಳಗಾಯಿತ್ತು, ಇಂತೀ ತ್ರಿವಿಧವು ನಷ್ಟ. ಇವರ ಮೇಲಣ ಅಂಕುರಿತವ ಬಲ್ಲ ಜಂಗಮವ ತೋರಾ ಕೂಡಲಸಂಗಮದೇವಾ.