ಬಸವಣ್ಣ   
  ವಚನ - 1343     
 
ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ; ಅನ್ಯಾಯವು ಸೋಂಕಲೀಯದವಧಾನವು, ಅರಿಷಡ್ವರ್ಗಂಗಳು ಮುಟ್ಟಲೀಯದವಧಾನವು. ಪಂಚಭೂತದ ಭವಿತ್ವವ ಕಳೆದು ಪ್ರಸಾದಕಾಯವಾಗಿಪ್ಪ ಪರಿಯ ನೋಡಾ. ಪಂಚೇಂದ್ರಿಯಂಗಳ ಗುಣವ ಕಳೆದು ಪಂಚವಿಂಶತಿ ತತ್ವದಲ್ಲಿ ಪರಿಣಾಮಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.