ಬಸವಣ್ಣ   
  ವಚನ - 1357     
 
ಶರಣೆಂದು ಕರ ಸಂತೋಷವ ಮಾಡಿ, ಮುರಿದು ಮುಂಜೆರಗ ಗಂಟಿಕ್ಕಿ, ನೆಲನ ಹೊಯಿದ ಕೈ ತಪ್ಪುವುದಲ್ಲದೆ, ಆದಿ ಶರಣರ ನುಡಿ ತಪ್ಪುವುದೆ? ಕೂಡಲಸಂಗಮದೇವರು ಸಾಕ್ಷಿಯಾಗಿ ಕಟ್ಟುವೆ ಗುಡಿಯನೆತ್ತುವೆನು ಧ್ವಜವ.