ಬಸವಣ್ಣ   
  ವಚನ - 1373     
 
ಸತ್ಯಮುಕ್ತಿಯ ಕಳೆಯ ನೋಡಾ, ನಿತ್ಯತತ್ವದ ಇರವ ನೋಡಾ, ಮೂರೊಂದಾದ ಆರೂಢನ ನೋಡಾ, ಕೂಡಲಸಂಗಮದೇವರಲ್ಲಿ ತದ್ಗತನಾಗಿಪ್ಪ ಮರುಳಶಂಕರದೇವರ ನಿಲವ ಪ್ರಭು ಸಿದ್ಧರಾಮಯ್ಯದೇವರಿಂದ ಕಂಡು ಬದುಕಿದೆನು.