ಬಸವಣ್ಣ   
  ವಚನ - 1374     
 
ಸದಾಚಾರವ ಕಂಡು, ಲಾಂಛನಪಕ್ಷವನಾ(ಡಿ)ದವರಿಗೆ, ಇಹದೊಳು ಪರದೊಳು ಗತಿಯಿಲ್ಲ, ಕಾಣಿರೋ. ಮಣ್ಣೆತ್ತಾದಡೇನು, ತನ್ನೆತ್ತು ಗೆಲಬೇಕೆಂಬುದಕ್ಕೊಲಿವ ನಮ್ಮ ಕೂಡಲಸಂಗಯ್ಯ.