ಬಸವಣ್ಣ   
  ವಚನ - 1389     
 
ಹಗಲಾಯಿತ್ತು (ಹೊತ್ತು)ಹೋಗದು, ಇರುಳಾಯಿತ್ತು ನಿದ್ರೆಬಾರದು, ಉಳಿದವರ ಮಾತು ಸಾಗದು, ಕೂಡಲಸಂಗಯ್ಯನಲ್ಲದೆ ಒಲ್ಲದು ಮನ.