ನೀರೊಳಗಣ ಶಿಲೆಯ ಒಡೆಯರುಗಳೆಲ್ಲರೂ ಕೂಡಿ,
ಅದ ಊರಿ ನೆನೆಯಿತ್ತೆಂದಡೆ, ಅದು ಸಾರಾಯವಾಯಿತ್ತೆ ?
ಮೀರಿದ ಶರಣರೆಲ್ಲರೂ ಕೂಡಿ,
ಗುರು ಕೊಟ್ಟ ಲಿಂಗವ ಸೇರುವ ಸಾರಾಯವ ಬಲ್ಲರೆ ?
ಹುತ್ತವ ಬಡಿದಡೆ ಹಾವು ಸತ್ತುದುಂಟೆ ?
ಇದು ನಿಶ್ಚಯವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Nīroḷagaṇa śileya oḍeyarugaḷellarū kūḍi,
ada ūri neneyittendaḍe, adu sārāyavāyitte?
Mīrida śaraṇarellarū kūḍi,
guru koṭṭa liṅgava sēruva sārāyava ballare?
Huttava baḍidaḍe hāvu sattuduṇṭe?
Idu niścayavende, niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.