ಬಸವಣ್ಣ   
  ವಚನ - 127     
 
ಸ್ನೇಹ ತಪ್ಪಿದ ಠಾವಿನಲ್ಲಿ ಗುಣವನರಸುವರೆ, ಅಯ್ಯಾ? ಹೂ ಬಾಡಿದಲ್ಲಿ ಪರಿಮಳವನರಸುವರೆ, ಅಯ್ಯಾ? ಎನ್ನ ತಂದೆ ಕೂಡಲಸಂಗಮದೇವಾ, ತೊರೆಯಿಳಿದರೆ ಅಂಬಿಗಂಗೇನುಂಟು?