ಬಸವಣ್ಣ   
  ವಚನ - 215     
 
ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ ಕಳನೇರಿ ಕಾದುವುದರಿದು ನೋಡಾ. ಬಣ್ಣವಿಟ್ಟು ನುಡಿದಲ್ಲಿ ಫಲವೇನು? ಚಿನ್ನಗೆಯ್ಕನಾಡುವನಂತೆ ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ ಕೂಡಲಸಂಗಮದೇವನೊಲಿದು ಸಲಹುವ.