ಬಸವಣ್ಣ   
  ವಚನ - 250     
 
ಕಾಣದ ಠಾವಿನಲಿ ಜರೆದರೆಂದರೆ, ಕೇಳಿ ಪರಿಣಾಮಿಸಬೇಕು. ಅದೇನು ಕಾರಣ? ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ಎನ್ನ ಮನದ ತದ್ ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ.