ಬಸವಣ್ಣ   
  ವಚನ - 256     
 
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ! ಕುಂದ ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲ-ಸೋಲಕ್ಕೆ ಹಿಡಿದು ಹೋರುವೆ: ಕೂಡಲಸಂಗನ ಶರಣರೆನ್ನಾಳ್ದರೆಂಬೆ!