ಬಸವಣ್ಣ   
  ವಚನ - 257     
 
ಇಲ್ಲವೆಯ ಮೇಲೆ ಕಂಚೊಡೆದಂತೆ, ಬಡ ಮನವೆನ್ನ ಕಾಡಿತ್ತಯ್ಯಾ; ಮತಿಯಿಲ್ಲದ ಮರುಳ ನಾನಯ್ಯಾ; ಭಕ್ತಿಯಿಲ್ಲದ ಬಡವ ನಾನು; ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ, ಎನಗೆ ನೀ ಕರುಣಿಸಾ ಕೂಡಲಸಂಗಮದೇವಾ!