ಬಸವಣ್ಣ   
  ವಚನ - 857     
 
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ, ನೋಡಾ: ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ; ನಾಕಡಿಯನೈದುವುದು, ಲೋಕದ ಕಡೆಯನೆ ಕಾಣ್ಬುದು, ಸೂಕ್ಷ್ಮ ಪಥದಲ್ಲಿ ನಡೆವುದು: ತನಗೆ ಬೇರೆ ಒಡಲಿಲ್ಲ; ಅಹಮ್ಮೆಂಬ ಗಾರುಡಿಗನ ನುಂಗಿತ್ತು. ಕೂಡಲಸಂಗನ ಶರಣರಲ್ಲದುಳಿದವರ!