ಬಸವಣ್ಣ   
  ವಚನ - 859     
 
ಆದಿಯಲ್ಲಿ ಶಿವಬೀಜವಲ್ಲದವರಿಗೆ ವೇದ್ಯವಾಗದು ಶಿವಜ್ಞಾನ; ಶಿವಭಕ್ತಿ. ಲಿಂಗಸ್ಥಳವಳವಡದು; ಜಂಗಮಸ್ಥಲವಳವಡದು; ಪಾದೋದಕ ಪ್ರಸಾದಸ್ಥಳವಳವಡದು; ನರಕದಲ್ಲಿ ಬೀಳುವ ಕರ್ಮಿಗಳಿಗೆ ಕೂಡಲಸಂಗನ ಶರಣರನುಭಾವ ನೆಲೆಗೊಳ್ಳದು.