ಬಸವಣ್ಣ   
  ವಚನ - 1183     
 
ಗುರಿಯನೆಚ್ಚವನೇ ಬಿಲ್ಲಾಳು, ಇರಿದು ರಣದಲ್ಲಿ ತಿ (ರುಗದವ) ನೇ ಮಾಸಾಳು, ದಾರಿದ್ರ್ಯ (ವ) ನೆ ಪರಿದವನೇ ದಯಾಳು, ಗುರುಪಾದಭಕ್ತಿಯುಳ್ಳವನದೇ ಬಾಳು, ಕೂಡಲಸಂಗಮದೇವನ ಶರಣರಾಳು.